Sunday, 26 July 2020

ಅಸೈನ್ಮೆಂಟ್-೧೦ ಶ್ರಿಮತಿ ಸರಿತಾ

ಕೋವಿಡ್-೧೯ ವೈರಸ್ ಸೊಂಕು ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟಗೊಳಿಸುವಲ್ಲಿ(ಕಲಿಕೆಯಲ್ಲಿ ಸದಾ ತೊಡಗುವಂತೆ ಮಾಡಲು) ತಮ್ಮ ಸಲಹೆ ಮತ್ತು ಕಾರ್ಯ ತಂತ್ರಗಳ ಪಟ್ಟಿ.
  • ಮನೆಯಿಂದಲೇ ಕಲಿಕೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಫೋನ ಮುಖಾಂತರ ಕರೆ ಮಾಡಿ ಸಂಭಾಷಣೆ ಮಾಡುವುದು.
  • ವಿದ್ಯಾರ್ಥಿಗಳ ವಾಟ್ಸ ಅಪ್ ಗ್ರೂಪ್ ಕ್ರಿಯೆಟ್ ಮಾಡಿ ವಿಷಯಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ನೀಡುವುದು,ನೋಟ್ಸಗಳನ್ನು ಕಳುಹಿಸುವುದು ಹಾಗೂ ಅವರು ಮಾಡಿದ ಮನೆಕೆಲಸ ಮತ್ತು ಚಟುವಟಿಕೆಗಳನ್ನು ಗುಂಪಿಗೆ ಕಳುಹಿಸಲು ತಿಳಿಸುವುದು.
  • ಶಿಕ್ಷಕರು ವಿದ್ಯಾರ್ಥಿಗಳ ಚಟುವಟಿಕೆಗಳನ್ನು ಪರಿಶೀಲಿಸಿ ಹಿಮ್ಮಾಹಿತಿ ನೀಡುವುದು.
  • ಮನೆಯಲ್ಲಿ ಶಿಕ್ಷಿತ ಪಾಲಕ/ಪೋಷಕರು ಮಕ್ಕಳ ಅಭ್ಯಾಸದ ಕುರಿತು ಗಮನ ಹರಿಸುವುದು.
  • ಹಳೆಯ ಪುಸ್ತಕಗಳನ್ನು ಪುನರಾವಲೋಕನ ಮಾಡುವುದು.
  • ತಮ್ಮ ಸ್ನೇಹಿತರು ಅಥವಾ ಸಹೋದರ ಸಹೋದರಿಯರಿಂದ ಪುಸ್ತಕಗಳನ್ನು ಪಡೆದು ಅಧ್ಯಯನ ಮಾಡುವುದು.
  • ಯೂಟ್ಯೂಬ್ ನಲ್ಲಿ ವಿಷಯಕ್ಕೆ ಸಂಬಂಧಿಸಿದ ವಿಡಿಯೋ ಗಳನ್ನು ನೋಡಲು ತಿಳಿಸುವುದು.
  • ಶಿಕ್ಷಣಕ್ಕೆ ಸಂಬಂಧಿಸಿದ ಅ್ಯಪ್ ಗಳಾದ ಖಾನ್ ಅಕಾಡಮಿ,ದಿಕ್ಷಾ ಅ್ಯಪ್, ಶಗೂನ್ ಅ್ಯಪ್, ಬೈಜುಸ್ ಅ್ಯಪ್ ಹತ್ತು ಹಲವು ಬಗೆಯ ಅ್ಯಪ್ ಗಳು ಲಭ್ಯವಿದ್ದು ಅವುಗಳನ್ನು ಬಳಸಿ ಜ್ಞಾನ ವೃದ್ಧಿಸಿಕೊಳ್ಳಲು ತಿಳಿಸುವುದು.
  • ಪದ ಬಂಧ , ಸಾಮನ್ಯ ಜ್ಞಾನ, ವಾಕ್ಯ ರಚನಾ, ಗಣಿತ ಲೆಕ್ಕಗಳ ಅನೇಕ ಮನರಂಜನಾ ಅ್ಯಪ್ ಗಳು ಲಭ್ಯ ವಿದ್ದು ಅವುಗಳ ಸದ್ಬಳಕೆಯಿಂದ ನಮ್ಮ ಕಲಿಕೆ ಹೇಗೆ ವೃದ್ಧಿ ಮಾಡಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸುವುದು.
  • ಅನ್ ಲೈನ್ ತರಗತಿಗಳನ್ನು ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಬೋಧನೆಯನ್ನು ಮಾಡುವುದು.
ವಠಾರದ ಮಕ್ಕಳ ಗುಂಪು ರಚಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ತಿಳಿಸುವುದು.
ಹೀಗೆ ಹಲವಾರು ಪ್ರಮುಖ ತಂತ್ರಗಳ ಮುಖಾಂತರ ಇಂತಹ ವಿಷಮ ಸ್ಥಿತಿಯನ್ನು ಸದುಪಯೋಗ ಪಡೆದು ಕಲಿಕೆಯಲ್ಲಿ ತೊಡಗಿಸಿಕೊಳ್ಳ ಬಹುದು.
ಶ್ರೀಮತಿ ಸರಿತಾ ಸ.ಶಿ.
ಸರಕಾರಿ ಆದರ್ಶ ವಿದ್ಯಾಲಯ ಬೇಮಳಖೇಡ
ತಾ: ಹುಮನಾಬಾದ, ಜಿ: ಬೀದರ್.

No comments:

Post a Comment

ಸಂಧಿಗಳು